ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ರಾಜಹಿಂಸೆ

ಇತ್ತೀಚೆಗೆ ಊರಿಗೆ ಹೋಗುವಾಗ ರಾಜ್ಯ ಸಾರಿಗೆ ಇಲಾಖೆಯ ಬಸ್‌ನಲ್ಲಿ ಸೊಳ್ಳೆ, ತಿಗಣೆಗಳಿಂದ ಹಿಂಸೆಯಾಯಿತು. ಹಿಂದೆಯೂ ಈ ಅನುಭವ ಆಗಿತ್ತು. ಅನೇಕ ಸ್ನೇಹಿತರೂ ಈ ಬಗ್ಗೆ ನನ್ನ ಗಮನ ಸೆಳೆದಿದ್ದರು. ಹೀಗಾಗಿ ಊರಿನಿಂದ ವಾಪಸ್ ಬರುತ್ತಿದ್ದಂತೆ, ಈ ವಿಷಯವಿಟ್ಟುಕೊಂಡು, ನಮ್ಮ ಪತ್ರಿಕೆಗಾಗಿ ವಿಶೇಷ ವರದಿ ಬರೆದೆ. ಅದು ಉತ್ತಮ ಚಿತ್ರದೊಂದಿಗೆ (ಕಾರ್ಟೂನ್) ನವೆಂಬರ್ ೩೦ ರಂದು ಪ್ರಕಟವಾಯಿತು. ಬಳಿಕ ಸಾರಿಗೆ ಇಲಾಖೆ, ತಾನು ತಿಗಣೆ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿಯೂ ಪ್ರಕಟಣೆ ಕಳುಹಿಸಿತ್ತು. ವೈಯಕ್ತಿಕವಾಗಿ ನನಗೂ ಈ ವರದಿಯ ಬರವಣಿಗೆ ಇಷ್ಟವಾಗಿದೆ. ಹೀಗಾಗಿ ಪತ್ರಿಕೆಯಲ್ಲಿ ಬಂದ ವರದಿಯ ಯಥಾವತ್ತನ್ನು ಬ್ಲಾಗ್‌ಗೆ ಹಾಕಿದ್ದೇನೆ. ನಿಮಗೂ ಇಷ್ಟವಾದರೆ ಒಂದು ಪ್ರತಿಕ್ರಿಯೆ ಹಾಕಿ.

0 comments:

Post a Comment

Last Posts